ಮಂಗಳೂರು: ಪಿಎನ್ಆರ್ ಪ್ರೊಡಕ್ಷನ್ ನ ತಿಂಬರ ರಾಘವೇಂದ್ರ ಹೊಳ್ಳ ನಿರ್ಮಾಣದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ “ಆರಾಟ” ಕನ್ನಡ ಚಲನಚಿತ್ರವು ಮಾರ್ಚ್ 1 ರಿಂದ 8 ರ ತನಕ ನಡೆಯುವ ಹದಿನಾರನೇ ಬೆಂಗಳೂರು ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ಕನ್ನಡ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುತ್ತದೆ. ಆರಾಟ ಚಿತ್ರವು ಕಳೆದ ಜೂನ್ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಆ ಸಂದರ್ಭದಲ್ಲಿ ಚಿತ್ರವನ್ನು ನೋಡದವರು ಈಗ ಸಿನಿಬಜಾರ್ ಡಿಜಿಟಲ್ ಫ್ಲಾಟ್ ಫಾರಂ ಮೂಲಕ ಚಿತ್ರವನ್ನು ನೋಡಬಹುದು. ದಡ್ಡ ಪ್ರವೀಣ ಖ್ಯಾತಿಯ ರಂಜನ್ ಕಾಸರಗೋಡು ಹಾಗೂ ವೆನ್ಯಾ ರೈ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದರು.
