23.9 C
Karnataka
Thursday, April 17, 2025

ಬೋರ್‌ವೇಲ್‌ ಲಾರಿ ರಿಪೇರಿಗೆ ಬಂದಿದ್ದ ವ್ಯಕ್ತಿ ಕಾರು ಡಿಕ್ಕಿ ಹೊಡೆದು ಸಾವು

ಕಡಬ: ಬೋರ್‌ವೇಲ್‌ ಲಾರಿ ರಿಪೇರಿಗೆ ಬಂದಿದ್ದ ವ್ಯಕ್ತಿ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಕಡಬ ತಾಲೂಕು ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ಸ೦ಭವಿಸಿದೆ.ತಮಿಳುನಾಡಿನ ಪಾರ್ಥಸಾರಥಿ ಊವರಾಜ್ (29)ಮೃತಪಟ್ಟವರು.
ತಮಿಳುನಾಡು ನಾಮಕ್ಕಲ್ ಜಿಲ್ಲೆಯ ದಿನೇಶ್ ಕುಮಾರ್ ಅವರ ಬೋರ್‌ವೇಲ್‌ ಲಾರಿ ರಿಪೇರಿಗಾಗಿ ಬಂದಿದ್ದ ಪಾರ್ಥಸಾರಥಿ ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ಪಾರ್ಥಸಾರಥಿ ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾಗ೯ ಮಧ್ಯದಲ್ಲೇ ಮೃತಪಟ್ಟರು.ಕಡಬ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles