24.4 C
Karnataka
Friday, April 11, 2025

ಮಂಗಳೂರು: ಅಂತರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನ

ಮಂಗಳೂರು: ದ.ಕ ಜಿಲ್ಲಾ ಇಂಡಿಯನ್ ಡೆಂಟಲ್ ಎಸೋಸಿಯೇಷನ್‌ ಅತಿಥೇಯದಲ್ಲಿ 49ನೇ ರಾಜ್ಯ, 8ನೇ ಅಂತರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನವು ಅತ್ತಾವರ ಕಾಪ್ರಿಗುಡ್ಡದಲ್ಲಿರುವ ಮರೆನ ಗ್ರೀನ್ಸ್‌ನಲ್ಲಿ ಡಿ.15 ಮತ್ತು 16 ಮತ್ತು 17 ರಂದು ಜರುಗಲಿದೆ.

ಡಿ.15ರಂದು ಬೆಳಗ್ಗೆ 10 ಗಂಟೆಗೆ ಮಾಹೆಯ ವೈಸ್ ಚಾನ್ಸಲರ್ ಲೆ.ಜ. ಡಾ. ವೆಂಕಟೇಶ್ ಉದ್ಘಾಟಿಸುವರು. ಮಾಹೆಯ ಪ್ರೊ.ಚಾನ್ಸಲರ್ ಡಾ.ಶರತ್ ರಾವ್ ಮುಖ್ಯ ಅತಿಥಿಯಾಗಿರುವರು. ಡಿ.16ರಂದು ನಡೆಯುವ ಬೆಳಗ್ಗೆ 9.45ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಐಡಿಎ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜೀವ್ ಕುಮಾರ್ ಚುಗ್, ರಾಷ್ಟ್ರೀಯ ಉಪಾಧ್ಯಕ್ಷ ಡಾ.ಶಿವಶರಣ್ ಶೆಟ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್ ಡಿ.ದೋಬ್ಲೆ, ರಾಜ್ಯ ಅಧ್ಯಕ್ಷ ಡಾ.ರಾಮಮೂರ್ತಿ ಟಿ.ಕೆ, ಜಿಲ್ಲಾ ಐಡಿಎ ಅಧ್ಯಕ್ಷ ಡಾ.ಜುನೈದ್ ಅಹ್ಮದ್ ಹಾಗೂ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿರುವರು.ಒಟ್ಟು 26 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ಭಾಷಣ, 231 ಪ್ರಬಂಧ ಮಂಡನೆ, 279 ಚಿತ್ರ ಪ್ರಬಂಧ ಮಂಡನೆ, 13 ಪ್ರಾತ್ಯಕ್ಷಿತೆ ಶಿಬಿರ ನಡೆಯಲಿದೆ. ದೇಶದ ವಿವಿಧೆಡೆಯಿಂದ ಅಂದಾಜು 2 ಸಾವಿರ ದಂತ ವೈದ್ಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles