35.9 C
Karnataka
Tuesday, April 22, 2025

ಜೈ ಭಾರತಿ ತರುಣ ವೃಂದದ ವಜ್ರ ಮಹೋತ್ಸವಕ್ಕೆ ಚಾಲನೆ

ಮಂಗಳೂರು : ನಗರದ ಹೊಯ್ಗೆಬೈಲ್‌ನ ಜೈ ಭಾರತಿ ತರುಣ ವೃಂದದ ವಜ್ರ ಮಹೋತ್ಸವ ಸಂಭ್ರಮಾಚರಣೆಯ ಉದ್ಘಾಟನೆ ಹಾಗೂ ಲಾಂಛನ ಅನಾವರಣ ಕಾರ್ಯಕ್ರಮ ಭಾನುವಾರ ಕುಲಶೇಖರ ಬಳಿಯ ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಕೇಂದ್ರದಲ್ಲಿ ನಡೆಯಿತು.
ವಜ್ರಮಹೋತ್ಸವ ಲಾಂಛನ ಅನಾವರಣಗೊಳಿಸಿದ ವಕೀಲ ರಾಘವೇಂದ್ರ ರಾವ್ ಮಾತನಾಡಿ ‘ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಯುವ ಸಮುದಾಯ ಸಮಾಜದ ಆಸ್ತಿ. ಕಳೆದ 60 ವರ್ಷದಿಂದ ಇಂತಹ ಸೇವೆ ನೀಡಿರುವ ಜೈ ಭಾರತಿ ತರುಣ ವೃಂದ ಮಾದರಿ ಯುವ ಸಂಘಟನೆಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ಯುವ ಸಮುದಾಯಕ್ಕೆ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸದಾ ಪ್ರೇರಣೆ ನೀಡಿರುವ ಜೈ ಭಾರತಿ ತರುಣ ವೃಂದ ಸ್ಥಳೀಯ ಯುವಕರ ಒಗ್ಗಟ್ಟಿನ ಪ್ರತೀಕವಾಗಿ ಬೆಳೆದಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ರಿಯಾ ಫೌಂಡೇಶನ್ ವಿಶೇಷ ಮಕ್ಕಳ ಕೇಂದ್ರದ ಮೇಲ್ವಿಚಾರಕಿ ರಶ್ಮಿತಾ ಮುಖ್ಯ ಅತಿಥಿಯಾಗಿದ್ದರು. ಜೈ ಭಾರತಿ ತರುಣ ವೃಂದದ ಅಧ್ಯಕ್ಷ ವಿಕ್ರಮ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೇಶವ ಕರ್ಕೇರ, ಕಾರ್ಯದರ್ಶಿ ಜಿತೇಂದ್ರ, ಕೋಶಾಧಿಕಾರಿ ಸುನಿಲ್ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್
ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಜೈ ಭಾರತಿ ತರುಣ ವೃಂದದಿಂದ ವಿಶೇಷ ಮಕ್ಕಳ ಕೇಂದ್ರಕ್ಕೆ ದಿನಸಿ ಸಾಮಾಗ್ರಿ ನೀಡಲಾಯಿತು. ಕೇಂದ್ರದ ನಿವಾಸಿಗಳೊಂದಿಗೆ ಸಹಭೋಜನ ಏರ್ಪಡಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles