ಮ೦ಗಳೂರು: ಓಝಾಸ್ ಸಂಸ್ಥೆಯ ವತಿಯಿಂದ ಶ್ರೀ ಸ್ವಾಮಿ ರಾಮಾನಂದಶ್ರಮ ಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ನೋಟ್ ಬುಕ್ಗಳನ್ನು ವಿತರಿಸಲಾಯಿತು.
ಓಝಾಸ್ ಸಂಸ್ಥೆಯ ಸ್ಥಾಪಕಿ ಮತ್ತು ಅಧ್ಯಕ್ಷೆ ಮಂಗಳಾ ನಂದಕುಮಾರ್ ಅವರು ಮಾತನಾಡಿ ‘ಮಕ್ಕಳು ಎಳೆ ವಯಸ್ಸಿನಲ್ಲಿಯೇ ಶಿಸ್ತುಬದ್ಧ ಮತ್ತು ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆಯ ಶಿಖರವನ್ನೆರಬಹುದು. ಇದಕ್ಕೆ ಗುರುಗಳ, ಪೋಷಕರ ಸಹಕಾರ ಮಾರ್ಗದರ್ಶನ ಅಗತ್ಯ ಎಂದು ಅವರು ಹೇಳಿದರು.
ಓಝಾಸ್ ಸಂಸ್ಥೆಯ ಗೌರವಾಧ್ಯಕ್ಷ ನಂದಕುಮಾರ್, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಮೀನ ಟೀಚರ್, ಮುಖ್ಯ ಶಿಕ್ಷಕಿ ಪದ್ಮಾವತಿ, ಶಿಕ್ಷಕರಾದ ಮೂರ್ತಪ್ಪ ಕೊರೆ, ಶಾಲೆಯ ಶಿಕ್ಷಕರು, ಓಝಸ್ ಸಂಸ್ಥೆಯ ಪದಾಽಕಾರಿಗಳಾದ ಲತಾ, ಅಶೋಕ್ ಗಿರೀಶ್, ಅಶ್ರಯ್ ಬೇಕಲ್ ಉಪಸ್ಥಿತರಿದ್ದರು.
