23.2 C
Karnataka
Saturday, June 14, 2025

ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ

ಮ೦ಗಳೂರು: ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆ ಹಾಗೂ ಐಆರ್‌ಸಿಟಿಸಿ ಸಹಯೋಗದಲ್ಲಿ “ಕರ್ನಾಟಕ ಭಾರತ ಗೌರವ ದಕ್ಷಿಣ ಯಾತ್ರೆ”ಯನ್ನು ಪ್ರಾರಂಭಿಸಲಾಗಿದೆ. ಈ ವಿಶೇಷ ಪ್ರವಾಸ ರೈಲಿನಲ್ಲಿ, ಭಾರತೀಯ ಪೌರಾಣಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಕನ್ಯಾಕುಮಾರಿ, ತಿರುವನಂತಪುರಂ, ರಾಮೇಶ್ವರಂ ಮತ್ತು ಮದುರೈ ಕ್ಷೇತ್ರಗಳನ್ನು ಒಳಗೊಂಡಿರುತ್ತವೆ.

ಪ್ರವಾಸದ ವಿವರಗಳು:

ಯಾತ್ರೆ ಅವಧಿ: 25 ಜೂನ್ 2025 ರಿಂದ 30 ಜೂನ್ 2025 (6 ದಿನಗಳು)
ಪ್ರವಾಸ ದರ: ಪ್ರತಿ ಪ್ರಯಾಣಿಕರಿಗೆ 15,000 ರೂ.-
ವಿಶೇಷ ಕೊಡುಗೆ: ಕರ್ನಾಟಕದ ನಿವಾಸಿ ಪ್ರಯಾಣಿಕರಿಗೆ ಸರ್ಕಾರದಿಂದ 5,000/- ಸಹಾಯಧನ (ವೈದ್ಯಕೀಯ ಪ್ರಮಾಣಪತ್ರ/ನಿವಾಸ ಪ್ರಮಾಣಪತ್ರ ಆಧಾರಿತ)

ಮುಖ್ಯ ದರ್ಶನ ಸ್ಥಳಗಳು:

ಕನ್ಯಾಕುಮಾರಿ: ಭಗವತಿ ದೇವಿ ದರ್ಶನ ಮತ್ತು ವಿವೇಕಾನಂದ ಶಿಲಾಸ್ಮಾರಕ
ತಿರುವನಂತಪುರಂ: ಪದ್ಮನಾಭಸ್ವಾಮಿ ದೇವಾಲಯ
ರಾಮೇಶ್ವರಂ: ರಾಮನಾಥಸ್ವಾಮಿ ದೇವಾಲಯ
ಮದುರೈ: ಮೀನಾಕ್ಷಿ ದೇವಾಲಯ

ಹತ್ತುವ ಸ್ಥಳಗಳು: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಎಸ್‌ಎಂವಿಟಿ ಬೆಂಗಳೂರು

ಪ್ರಮುಖ ವೈಶಿಷ್ಟ್ಯಗಳು:

• ಭಾರತ ಗೌರವ್ ಪ್ರವಾಸ ರೈಲಿನಲ್ಲಿ ಎಸಿ III ಟೈರ್ ವಿಭಾಗದಲ್ಲಿ ಪ್ರಯಾಣ
• ಕನ್ಯಾಕುಮಾರಿ ಮತ್ತು ರಾಮೇಶ್ವರಂನಲ್ಲಿ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ಇಬ್ಬರು/ಮೂರು ಜನ ಹಂಚಿಕೊಂಡು ಒಂದು ರಾತ್ರಿ ವಾಸ್ತವ್ಯ
• ಪ್ರವಾಸದ ಅವಧಿಯಲ್ಲಿ ಸಸ್ಯಾಹಾರಿ ಆಹಾರ ಒದಗಿಸಲಾಗುತ್ತದೆ
• ಸ್ಥಳಾಂತರ ಮತ್ತು ಸ್ಥಳ ವೀಕ್ಷಣೆಗಳಿಗೆ ಹವಾನಿಯಂತ್ರಿತವಲ್ಲದ ಬಸ್ ಸೇವೆ
• ಪ್ರತಿಕೋಚ್‌ಗೆ ಪ್ರವಾಸ ಮಾರ್ಗದರ್ಶಕರು
• ಪ್ರಯಾಣ ವಿಮೆ ಹಾಗೂ ರೈಲಿನಲ್ಲಿ IRCTC ವ್ಯವಸ್ಥಾಪಕರ ನೇತೃತ್ವ
• ರೈಲಿನಲ್ಲಿ ಭದ್ರತಾ ವ್ಯವಸ್ಥೆ
• ಎಲ್ಲಾ ಅನ್ವಯಿಸಬಹುದಾದ ತೆರಿಗೆಗಳು ಸೇರಿವೆ

ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : IRCTC ಸಂಪರ್ಕ ಸಂಖ್ಯೆ:
ಬೆಂಗಳೂರು – 9363488229 / 9003140708 / 9003140710 / 8595931290 ಮೈಸೂರು – 8595931294 / 9731641611 ಹುಬ್ಬಳ್ಳಿ – 8595931293 / 8595931291 ಅಧಿಕೃತ ವೆಬ್‌ಸೈಟ್: www.irctctourism.com

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles