ಮಂಗಳೂರು: ಮಂಗಳೂರು ಧರ್ಮಪಾಲಕ ಸಂಘದ ಡಯಾಸಿಸನ್ ಕೌನ್ಸಿಲ್ ಫಾರ್ ಕ್ಯಾಥೋಲಿಕ್ ವಿಮೆನ್, ಡೀನರಿ ಸ್ತ್ರೀ ಸಂಘಟನೆ, ದಕ್ಷಿಣ ಕನ್ನಡ ಕಥೊಲಿಕ್ ಸಂಘ ಹಾಗೂ ಆರೋಗ್ಯ ಸಹಯೋಗದ ಭಾಗವಾಗಿ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್, ದೇರಳಕಟ್ಟೆ ಮತ್ತು ಭಾರತೀಯ ಕ್ಯಾನ್ಸರ್ ಸೊಸೈಟಿ, ಮಂಗಳೂರು ಇವರ ಸಂಯುಕ್ತ ಪ್ರಯತ್ನದಲ್ಲಿ ಕಿನ್ನಿಗೋಳಿ ಚರ್ಚ್ ಶಾಲೆಯಲ್ಲಿ ಮಹಿಳೆಯರಿಗೆ ವಿಶೇಷವಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಫಾ. ಆಸ್ವಾಲ್ಡ್ ಮೊಂತೇರೊ, ವಿಕಾರ್ ಫೊರೇನ್; ಫಾ. ಅನಿಲ್ ಡಿಸೋಜಾ, ಡೀನರಿ ಸ್ತ್ರೀ ಸಂಘಟನೆ ನಿರ್ದೇಶಕ; ಫಾ. ಜೋಕಿಂ ಫೆರ್ನಾಂಡಿಸ್, ಕಿನ್ನಿಗೋಳಿ ಚರ್ಚ್ ಧರ್ಮಗುರುಗಳು; ರೋನಾಲ್ಡ್ ಗೋಮ್ಸ್, ದಕ್ಷಿಣ ಕನ್ನಡ ಕಥೋಲಿಕ್ ಸಂಘದ ಅಧ್ಯಕ್ಷರು; ಗ್ರೆಟ್ಟಾ ಪಿಂಟೋ, ಡಿಸಿಸಿಡಬ್ಲ್ಯೂ ಅಧ್ಯಕ್ಷೆ; ಅನಿತಾ ಡಿಸೋಜಾ, ಡೀನರಿ ಸ್ತ್ರೀ ಸಂಘಟನೆ ಅಧ್ಯಕ್ಷೆ; ನಳಿನಿ ಡಿಸೋಜಾ, ಕಾರ್ಯದರ್ಶಿ; ಸಂಗೀತಾ ಸಿಕ್ವೇರಾ, ಕಿನ್ನಿಗೋಳಿ ಸ್ತ್ರೀ ಸಂಘಟನೆ ಅಧ್ಯಕ್ಷೆ; ಗ್ರೆಟ್ಟಾ ರೊಡ್ರಿಗಸ್, ಕಾರ್ಯದರ್ಶಿ; ವಿಲಿಯಮ್ ಡಿಸೋಜಾ, ಕಿನ್ನಿಗೋಳಿ ಪಾರಿಶ್ ಕೌನ್ಸಿಲ್ ಉಪಾಧ್ಯಕ್ಷರು ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ನ ವೈದ್ಯರಾದ ಡಾ. ಆಶ್ವತಿ, ಡಾ. ಅಫ್ಸಲ್, ಡಾ. ಶ್ರೇಯಾ ಹೆಗ್ಡೆ, ಡಾ. ರಶ್ಮಿ, ಡಾ. ಹಬಿಬಾ ಮತ್ತು ಡಾ. ಸಿಮ್ರನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
