ಮ೦ಗಳೂರು: ಸೈಂಟ್ ಅಲೋಶಿಯಸ್ ಎಐಎ೦ಐಟಿ ಕೇಂದ್ರ ಮತ್ತು ಐಬಿಎ೦ ನಡುವಿನ ಒಡಂಬಡಿಕೆಗೆ ಸಹಿ ಹಾಕಲಾಯಿತು. ಸಹಿ ಸಮಾರಂಭದಲ್ಲಿ ಎಐಎ೦ಐಟಿ ಕೇಂದ್ರದ ನಿರ್ದೇಶಕ ಡಾ. ಫಾ. ಕಿರಣ್ ಕೋಟ, ಐಬಿಎ೦ ನ ಸಾಫ್ಟ್ವೇರ್ ಸೇವೆಗಳ ರಾಷ್ಟ್ರೀಯ ನಿರ್ವಾಹಕ ಜಗದೀಶ್ ಭಟ್, ಪ್ರಾದೇಶಿಕ ನಿರ್ವಾಹಕ ಮಧುಸೂಧನ್, ಟೆಕ್ಪಾಥ್ನ ಪ್ರಾದೇಶಿಕ ನಿರ್ವಾಹಕ ಜಿತೇಶ್ ಹಾಗೂ ಎಐಎ೦ಐಟಿ ನ ಡೀನ್ಗಳಾದ ಡಾ. ರಜನಿ ಸುರೇಶ್ ಮತ್ತು ಡಾ. ಹೆಮಲತಾ ಎನ್. ಉಪಸ್ಥಿತರಿದ್ದರು.
ಈ ಒಡಂಬಡಿಕೆಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸ್ಪರ್ಧಾತ್ಮಕ ಸಂಸ್ಥೆಗಳಾಗಿ ಗುರುತಿಸಿಕೊಳ್ಳುವ ಮಹತ್ವದ ಅವಕಾಶವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಾಫ್ಟ್ವೇರ್ಗಳ ಶಿಕ್ಷಣ ಹಾಗೂ ತರಬೇತಿಗಾಗಿ ಉದ್ಯಮ ಮತ್ತು ಶೈಕ್ಷಣಿಕ ವಲಯಗಳಲ್ಲಿ ಆದ್ಯತೆಯ ಸಂಸ್ಥೆಯಾಗಿ ಗುರುತಿಸಿಕೊಳ್ಳುವ ಅವಕಾಶವಿದೆ. ಈ ಮೂಲಕ ವಿದ್ಯಾರ್ಥಿಗಳು ಹಾಗೂ ಬೋಧಕರು ಐಬಿಎ೦ ನ ಶ್ರೇಷ್ಠ ಸಾಫ್ಟ್ವೇರ್ಗಳ ಬಳಕೆಯ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು. ಐಬಿಎ೦ ಸಾಫ್ಟ್ವೇರ್ಗಳನ್ನು ಆಧಾರವಾಗಿಟ್ಟುಕೊಂಡು ನವೀನ ಪಠ್ಯಕ್ರಮಗಳನ್ನೂ ಉದ್ಯಮ ಸಂಬಂಧಿತ ವಿಭಿನ್ನ ತಂತ್ರಜ್ಞಾನಗಳನ್ನೂ ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ ಐಬಿಎ೦ ಅಥವಾ ಅದರ ವ್ಯವಹಾರ ಪಾಲುದಾರ ಸಂಸ್ಥೆಗಳ ಉದ್ಯಮ ತಜ್ಞರಿಂದ ನೈಜ ಅನುಭವದಿಂದ ಕಲಿಯುವ ಅವಕಾಶವೂ ಲಭ್ಯವಾಗುತ್ತದೆ. ಅಂತೆಯೇ, ವಿದ್ಯಾರ್ಥಿಗಳು ಹಾಗೂ ಬೋಧಕರುಐಬಿಎ೦ ಸಾಫ್ಟ್ವೇರ್ ಆಧಾರಿತ ವೃತ್ತಿಪರ ಮತ್ತು ಜಾಗತಿಕ ಪ್ರಮಾಣಪತ್ರಗಳನ್ನು ಪಡೆದು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯಲು ಈ ಒಡಂಬಡಿಕೆ ನೆರವಾಗಲಿದೆ.
