21.4 C
Karnataka
Sunday, June 15, 2025

ನೆಹರು ಆಧುನಿಕ ಭಾರತದ ಶಿಲ್ಪಿ: ಬಿ ರಮಾನಾಥ ರೈ

ಮ೦ಗಳೂರು: ಪಂಡಿತ್ ಜವಹರಲಾಲ್ ನೆಹರು ಅವರು ಆಧುನಿಕ ಭಾರತದ ಶಿಲ್ಪಿ ಎ೦ದು ಬಿ ರಮಾನಾಥ ರೈ ಹೇಳಿದರು.
ದ. ಕ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಂಡಿತ್ ಜವಾರಲಾಲ್ ನೆಹರು ಅವರ ಪುಣ್ಯತಿಥಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ನೆಹರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದರು. ವೈಜ್ಞಾನಿಕ ಮನೋಭಾವದ ನೆಹರು ರವರು ಪ್ರಜಾಪ್ರಭುತ್ವ, ಜಾತ್ಯತೀತ ಮೌಲ್ಯಗಳನ್ನು ಸಂವಿದಾನದಲ್ಲಿ ಸೇರಿಸಲು ಶ್ರಮಪಟ್ಟಿದ್ದರು.ಅಲ್ಪಸಂಖ್ಯಾತ ಕೋಮುವಾದ ಆ ಸಮುದಾಯಕ್ಕೆ ಅಪಾಯವಾದರೆ
ಬಹುಸಂಖ್ಯಾತ ಕೋಮುವಾದವು ದೇಶಕ್ಕೆ ಅಪಾಯ ಎಂಬ ನೆಹರು ರವರು ಮಾತುಗಳು ದೇಶದ ಇಂದಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ದ ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ರವರು ಪ್ರಾಸ್ತವಿಕ ಮಾತುಗಳೊಂದಿಗೆ ನೆಹರುರವರಿಗೆ ನುಡಿನಮನ ಸಲ್ಲಿಸಿದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ವ೦ದಿಸಿದರು.
ಕಾಂಗ್ರೆಸ್ ನಾಯಕರಾದ ಪದ್ಮರಾಜ್ ಆರ್ ಪೂಜಾರಿ, ಮಲರ್ ಮೊಹಮ್ಮದ್ ಮೋನು, ಪ್ರಕಾಶ್ ಸಾಲಿಯಾನ್, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮಂಜುಳಾ ನಾಯಕ್, ಸದಾಶಿವ ಶೆಟ್ಟಿ, ಪದ್ಮನಾಭ ರೈ ಕಲ್ಲಡ್ಕ,
ಟಿ ಹೊನ್ನಯ್ಯ, ವಿಕಾಸ್ ಶೆಟ್ಟಿ, ಶುಭೋದಯ ಆಳ್ವಾ, ಸಬೀರ್ ಎಸ್, ಸತೀಶ್ ಪೆಂಗಲ್, ಝಕೀರ್ಯ ಮಲರ್, ಆಳ್ವಿನ್ ಪ್ರಕಾಶ್, ಪ್ರವೀಣ್ ಆಳ್ವಾ, ಕವಿತಾ ವಾಸು, ಜಿತೇಂದ್ರ ಸುವರ್ಣ, ಯೋಗೀಶ್ ಕುಮಾರ್, ಸಮರ್ಥ್ ಭಟ್, ಕೆ ಜೋರ್ಜ್, ಹೇಶವಂತ್ ಪ್ರಭು, ಡೆಂಝಿಲ್, ಅರ್ಚನಾ , ಜಾನ್ ಮೊಂತೇರೋ, ನಝೀರ್ ಬಜಾಲ್ ಮೊದಲದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles