19.9 C
Karnataka
Monday, March 10, 2025

ಬಜಾಲ್ ಬೊಲ್ಲ :ಮೇಲ್ಛಾವಣಿ ಅಭಿವೃದ್ಧಿ ಕಾಮಗಾರಿ

ಮಂಗಳೂರು:‌ ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯ ಬಜಾಲ್ ಬೊಲ್ಲ ಬಳಿ ಸಾರ್ವಜನಿಕ ಮೇಲ್ಛಾವಣಿ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ನಂತರ ಮಾತನಾಡಿದ ಶಾಸಕರು, ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿನ ಮೇಲ್ಛಾವಣಿಯ ಅಭಿವೃದ್ಧಿ ಅಗತ್ಯವಾಗಿದ್ದು ವಾರ್ಡಿನ ಪಾಲಿಕೆ ಸದಸ್ಯೆ ಶೋಭಾ ಪೂಜಾರಿಯವರು ಸಹ ಈ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಇದೀಗ ಶಾಸಕರ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಕಿರಣ್ ರೈ, ಯತೀಶ್ ಪೆರ್ಜಿಲ, ಹರೀಶ್ ಕುತ್ತಡ್ಕ, ಮನೋಜ್ ಕುತ್ತಡ್ಕ, ಯತೀಶ್ ಕುತ್ತಡ್ಕ ರಮೇಶ್ ಪೂಜಾರಿ, ಪೆರ್ಜಿಲ ಮಾತೃ ಮಂಡಳಿಯ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles