22.5 C
Karnataka
Saturday, June 14, 2025

ನೈಋತ್ಯ ರೈಲ್ವೆ : ಸೇವೆ, ಆದಾಯ ಮತ್ತು ಸುರಕ್ಷೆಯಲ್ಲಿ ಪ್ರಗತಿ

ಮ೦ಗಳೂರು: ನೈಋತ್ಯ ರೈಲ್ವೆಯು ಮೇ 2025 ರಲ್ಲಿ ಪ್ರಯಾಣಿಕರ ಸೇವೆ, ಡಿಜಿಟಲ್ ನವೀನತೆ ಮತ್ತು ಆದಾಯದಲ್ಲಿ ಪ್ರಗತಿಯನ್ನು ದಾಖಲಿಸಿದ್ದು,
ಗಮನಾರ್ಹ ಸಾಧನೆಗಳೊಂದಿಗೆ ಹರ್ಷ ವ್ಯಕ್ತ ಪಡಿಸಿದೆ.

ಪ್ರಯಾಣಿಕರ ಸೌಲಭ್ಯಗಳಲ್ಲಿ ಸುಧಾರಣೆ:
ಹುಬ್ಬಳ್ಳಿ ವಿಭಾಗದಲ್ಲಿ ಹೊಸ ಮಾರ್ಗದರ್ಶಕ್ ಡಿಜಿಟಲ್ ನಕ್ಷೆ ಮತ್ತು ಸಂಚರಣೆ ವ್ಯವಸ್ಥೆಪರಿಚಯಿಸಲಾಗಿದೆ. ಹುಬ್ಬಳ್ಳಿ (2) ಮತ್ತು
ಮೈಸೂರು (4) ನಿಲ್ದಾಣಗಳಲ್ಲಿ ಒಟ್ಟು ಆರು ಹೊಸ ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳನ್ನು ಸ್ಥಾಪಿಸಲಾಗಿದೆ.
ಪಾರ್ಕಿಂಗ್ ಮತ್ತು ರೇಡಿಯೋ ಟ್ಯಾಕ್ಸಿಗಳ ಸೇವೆಗಾಗಿ ಹೊಸ ಒಪ್ಪಂದಗಳನ್ನು ಕೈಗೊಳ್ಳಲಾಯಿತು: ಎಸ್‌ಎಂವಿಬಿಯಲ್ಲಿ ಪ್ರವೇಶ
ನಿಯಂತ್ರಿತ ಪಾರ್ಕಿಂಗ್ ಸೇವೆಗೆ 69.40 ಲಕ್ಷ ರೂ.ಮತ್ತು ಹುಬ್ಬಳ್ಳಿಯಲ್ಲಿ 56.00ಲಕ್ಷ ರೂ.ಗಳ ಒಪ್ಪಂದಗಳನ್ನು ಮಾಡಲಾಯಿತು.
ಮೈಸೂರಿನಲ್ಲಿ ಮೊಬೈಲ್ ಪರಿಕರಗಳ ಕಿಯೋಸ್ಕ್‌ಗೆ 30.90 ಲಕ್ಷ ರೂ. ಮತ್ತು ಕೆಎಸ್‌ಆರ್ ಬೆಂಗಳೂರು ನಗರದಲ್ಲಿ ಹವಾನಿಯಂತ್ರಿತ
ಮಲ್ಟಿಕ್ಯೂಸಿನ್ ಕೋಚ್ ರೆಸ್ಟೋರೆಂಟ್‌ಗೆ 215.46 ಲಕ್ಷ ರೂ.ಗಳ ವಾಣಿಜ್ಯ ಒಪ್ಪಂದಗಳನ್ನು ಅಂತಿಮಗೊಳಿಸಲ್ಪಟ್ಟಿತು.

ಆದಾಯದಲ್ಲಿ ಪ್ರಮುಖ ಬೆಳವಣಿಗೆ:
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ನೈಋತ್ಯ ರೈಲ್ವೆಯ ಒಟ್ಟು ಆದಾಯವು 642 ಕೋಟಿ ರೂ.ಯಿಂದ 780 ಕೋಟಿ ರೂ.ಗಳಿಗೆ
ತಲುಪಿದ್ದುಇದು ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಸರಕು ಸಾಗಣೆ ಆದಾಯದಲ್ಲಿ ಶೇ. 36.91 ರಷ್ಟು
ಹೆಚ್ಚಳವಾಗಿದ್ದು, 459.43 ಕೋಟಿ ರೂ. ತಲುಪಿದೆ. ಟಿಕೆಟ್ ಪರಿಶೀಲನೆ ಮೂಲಕ 6.57 ಕೋಟಿ ರೂ. ಆದಾಯವನ್ನು ಗಳಿಸಿದ್ದು,
ಇದು ಶೇ. 33ರಷ್ಟು ಏರಿಕೆಯನ್ನುಕಂಡಿದೆ. ಪಾರ್ಸೆಲ್ ಸೇವೆಗಳ ಮೂಲಕ ಆದಾಯವು ₹14.84 ಕೋಟಿ ರೂ.ಗೆ ತಲುಪಿದ್ದು, ಶೇ.
11.66ರಷ್ಟು ಹೆಚ್ಚಳವಾಗಿದೆ. ಆನ್‌ಲೈನ್ ಪಾವತಿ ವ್ಯವಸ್ಥೆಯು 102.97 ಕೋಟಿ ರೂ. ಮೌಲ್ಯದ ಸರಕು ವಹಿವಾಟುಗಳನ್ನು
ಸುಗಮಗೊಳಿಸಿದ್ದು, 100% ಡಿಜಿಟಲ್ ಪಾವತಿಗಳನ್ನು ಸಾಧಿಸಿದೆ. ಜೊತೆಗೆ, ಮೊಬೈಲ್ ಘಟಕ ನಿರ್ವಹಣೆಯ ಉದ್ದೇಶಕ್ಕಾಗಿ
ಐಆರ್‌ಸಿಟಿಸಿ 18.63 ಕೋಟಿ ರೂ. ನೆರವನ್ನು ಒದಗಿಸಿದೆ.

ಸರಕು ಸಾಗಣೆ ಮತ್ತು ಲೋಡಿಂಗ್ ಮೈಲಿಗಲ್ಲುಗಳು:
ಮೈಸೂರು ವಿಭಾಗವು 22,230 ನೆಸ್ಲೆ ಉತ್ಪನ್ನ ಪ್ಯಾಕೇಜ್‌ಗಳೊಂದಿಗೆ ಪಾರ್ಸೆಲ್ ರೈಲನ್ನು ಲೋಡ್ ಮಾಡಿ 22.27 ಲಕ್ಷ ರೂ.
ಆದಾಯ ಗಳಿಸಿತು. ಹುಬ್ಬಳ್ಳಿ ವಿಭಾಗವು ಎರಡು ಮೊಲಾಸಸ್ ರೇಕ್‌ಗಳನ್ನು ಲೋಡ್ ಮಾಡುವ ಮೂಲಕ 1.20 ಕೋಟಿ ರೂ.
ಗಳಿಸಲಾಯಿತು. ಆಟೋಮೊಬೈಲ್ ಲೋಡಿಂಗ್ ಮೇ 2024ಕ್ಕೆ ಹೋಲಿಸಿದರೆ 44 ರೇಕ್‌ಗಳಿಂದ ಮೇ 2025ರಲ್ಲಿ 58 ರೇಕ್‌ಗಳಿಗೆ
(1464 ವ್ಯಾಗನ್‌ಗಳು) ಹೆಚ್ಚಾಗಿ 9.01 ಕೋಟಿ ರೂ.ಗಳಿಂದ 11.52 ಕೋಟಿ ರೂ.ಆದಾಯ ಗಳಿಸಿತು. ಜಿ-ಸ್ಲ್ಯಾಗ್, ಸಕ್ಕರೆ ಮತ್ತು
ರಸಗೊಬ್ಬರವನ್ನು ಹೊಸ ಸರಕುಗಳಾಗಿ ಸೇರಿಸಲಾಯಿತು.

ಕಾರ್ಯಾಚರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ:
ಪ್ರಯಾಣಿಕರ ಸಂಖ್ಯೆ ಶೇ. 3.58ರಷ್ಟು ಹೆಚ್ಚಾಗಿ 15.33 ಮಿಲಿಯನ್‌ಗಳಿಗೆ ತಲುಪಿ ಇದರಿಂದ 263 ವಿಶೇಷ ರೈಲುಗಳ ಸೇವೆ
ನೀಡಲಾಯಿತು. ಮೇ 22, 2025 ರಂದು, ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಮೃತ್ ಭಾರತ್ ನಿಲ್ದಾಣ
ಯೋಜನೆಯಡಿಯಲ್ಲಿ ಮುನಿರಾಬಾದ್, ಬಾಗಲಕೋಟೆ, ಗೋಕಾಕ್ ರೋಡ್, ಧಾರವಾಡ ಮತ್ತು ಗದಗ ನಿಲ್ದಾಣಗಳನ್ನು
ಉದ್ಘಾಟಿಸಿದರು. ಮೇ 15, 2025 ರಂದು, ಮಾನ್ಯ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣನವರು
ತುಮಕೂರು–ಚಿತ್ರದುರ್ಗ–ದಾವಣಗೆರೆ ಮಾರ್ಗವನ್ನು ಪರಿಶೀಲಿಸಿದರು ಮತ್ತು ಗದಗ–ವಾಡಿ ಹೊಸ ಮಾರ್ಗದ ತಳಕಲ್–ಕುಷ್ಟಗಿ
ಮಾರ್ಗವನ್ನು ಉದ್ಘಾಟಿಸಿದರು.

ಸುರಕ್ಷತೆ ಮತ್ತು ಗ್ರಾಹಕ ಸೇವೆ:
ಮೇ 2024ಕ್ಕೆ ಹೋಲಿಸಿದರೆ ರೈಲ್ ಮದದ್ ದೂರುಗಳು ಶೇ. 30.29ರಷ್ಟು ಕಡಿಮೆಯಾದವು – ಇದು ಸುಧಾರಿತ ಗ್ರಾಹಕ
ತೃಪ್ತಿಯನ್ನು ಸೂಚಿಸುತ್ತದೆ. ಮೇ 16, 2025ರಂದು ಅರಸಿಕೆರೆಯಲ್ಲಿ ಬೆಂಕಿಯ ಅಪಾಯ ನಿವಾರಣೆಗೆ 183 ಸುರಕ್ಷತಾ ತಪಾಸಣೆ ಮತ್ತು
ಅಣಕು ಭದ್ರತಾ ಅಭ್ಯಾಸಗಳನ್ನು ಕೈಗೊಳ್ಳಲಾಯಿತು.
ನೈಋತ್ಯ ರೈಲ್ವೆ ತನ್ನ ಸೇವೆಗಳನ್ನು ಉತ್ತಮಗೊಳಿಸಲು, ಕಾರ್ಯಾಚರಣೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ
ನಿರಂತರವಾಗಿ ಶ್ರಮಿಸುತ್ತಿದೆ ಎ೦ದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles