23.8 C
Karnataka
Saturday, April 12, 2025

ಎಚ್‍ಪಿಸಿಎಲ್ ಮುಷ್ಕರ ವಾಪಾಸ್

ಮಂಗಳೂರು:ಸುರತ್ಕಲ್ ಎಚ್‍ಪಿಸಿಎಲ್ ಸಂಸ್ಥೆಯಲ್ಲಿ ಎಲ್‍ಪಿಜಿ ಬುಲೆಟ್ ಟ್ಯಾಂಕರ್ ಕ್ಲೀನರ್‍ಗಳ ಸಂಬಳ ವಿವಾದದಲ್ಲಿ ನಡೆಯುತ್ತಿದ್ದ ಮುಷ್ಕರ ಹಿಂಪಡೆಯಲಾಗಿದೆ.
ಈ ಸಂಬಂಧ ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಷ್ಕರ ಹಿಂಪಡೆದು, ನಾಳೆಯಿಂದ ಬುಲೆಟ್ ಟ್ಯಾಂಕರ್‍ಗಳಿಗೆ ಅಡುಗೆ ಅನಿಲ ಲೋಡಿಂಗ್ ಕಾರ್ಯ ನಡೆಸಲು ನಿರ್ಧರಿಸಲಾಗಿದೆ. ಕ್ಲೀನರ್‍ಗಳಿಗೆ ಪ್ರತಿ ಟ್ರಿಪ್‍ಗೆ ರೂ. 900 ರೂ. ನಿಗದಿಪಡಿಸಿ, ಸಭೆಯಲ್ಲಿ ಉಭಯ ಪಕ್ಷಗಳು ಒಪ್ಪಿಕೊಂಡವು.ಸಭೆಯಲ್ಲಿ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್, ಎಚ್.ಪಿ.ಸಿ.ಎಲ್. ಸಂಸ್ಥೆಯ ಅಧಿಕಾರಿಗಳು, ಬುಲೆಟ್ ಟ್ಯಾಂಕರ್ಸ್ ಅಸೋಸಿಯೇಶನ್ ಹಾಗೂ ಕಾರ್ಮಿಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles