26 C
Karnataka
Saturday, April 19, 2025

ರಸ್ತೆಯ ಬದಿಯ ನೀರಿನ ಕಣಿಗೆ ಬಿದ್ದ ಕಾರು : ಓವ೯ ಸಾವು

ಕಡಬ : ರಸ್ತೆಯ ಬದಿಯಲ್ಲಿರುವ ನೀರಿನ ಕಣಿಗೆ ಕಾರು ಬಿದ್ದು ಸ೦ಭವಿಸಿದ ಅಪಘಾತದಲ್ಲಿ ಓವ೯ ಮೃತಪಟ್ಟು 6 ಮ೦ದಿ ಗಾಯಗೊ೦ಡ ಘಟನೆ ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕಿದು ಎಂಬಲ್ಲಿ ಸ೦ಭವಿಸಿದೆ. ಮಂಡ್ಯ ಕೆ.ಆರ್.ಪೇಟೆ ತಾಲೂಕು
ಮುರುಕ್ಕನಹಳ್ಳಿ ಗ್ರಾಮದ ನಿವಾಸಿ ವಿರುಪಾಕ್ಷ (40) ಮೃತಪಟ್ಟವರು.
ವಿರುಪಾಕ್ಷ ತನ್ನ ಸ್ನೇಹಿತರಾದ ಯೋಗೇಶ್ , ಸಂತೋಷ್, ಸ್ವಾಮಿ, ಶಿವಕುಮಾರ್, ನಾಗೇಶ್, ದ್ವಾರಕೇಶ್ ಅವರುಗಳೊಂದಿಗೆ, ಮಾರತಿ ಎಕೊ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದರು. ಅಲ್ಲಿ೦ದ ಸುಬ್ರಹ್ಮಣ್ಯಕ್ಕೆ ತೆರಳುತ್ತಾ, ಕಡಬ ಬಿಳಿನೆಲೆ ಗ್ರಾಮದ ಕಿದು ಎಂಬಲ್ಲಿ ತಲುಪಿದಾಗ ಕಾರು ರಸ್ತೆಯ ಬದಿಯಲ್ಲಿರುವ ನೀರಿನ ಕಣಿಗೆ ಬಿದ್ದಿರುತ್ತದೆ. ಪರಿಣಾಮ ಕಾರಿನಲ್ಲಿದ್ದ ವಿರುಪಾಕ್ಷ ಅವರಿಗೆ ಗಂಭೀರ ಪ್ರಮಾಣದ ಗಾಯವಾಗಿರುತ್ತದೆ. ಕಾರಿನಲ್ಲಿದ್ದ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಗಾಯಾಳು ವಿರುಪಾಕ್ಷ ಅವರನ್ನು ಉಪಚರಿಸಿ, ಕಡಬ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಗೆ ಕರೆತಂದಿದ್ದು ಅವರು ಅದಾಗಲೇ ಮೃತಪಟ್ಟಿದ್ದರು. ಕಡಬ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles