27.8 C
Karnataka
Sunday, April 20, 2025

ಬೆಂಗ್ರೆ ಫೆರ್ರಿ ಜೆಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 11ನೇ ಪಣಂಬೂರು ವಾರ್ಡಿನ ತಣ್ಣೀರುಬಾವಿ ತೋಟ ಬೆಂಗ್ರೆ ಮುಖ್ಯ ರಸ್ತೆಯಿಂದ ಬೆಂಗ್ರೆ ಫೆರ್ರಿ ಜೆಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಇಲ್ಲಿನ ರಸ್ತೆ ಅಭಿವೃದ್ಧಿಯ ಅಗತ್ಯತೆ ಬಗ್ಗೆ ಸ್ಥಳೀಯರ ಬೇಡಿಕೆಯ ಅನುಸಾರವಾಗಿ ನಿಕಟ ಪೂರ್ವ ಪಾಲಿಕೆ ಸದಸ್ಯೆ ಸುನೀತಾ ಅವರು ನಿರಂತರವಾಗಿ ನನ್ನ ಗಮನಕ್ಕೆ ತಂದಿದ್ದರು. ಮುಂದುವರಿದು ಇದೀಗ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ವರದರಾಜ್ ಬೆಂಗ್ರೆ, ಮಂದಿರದ ಅಧ್ಯಕ್ಷರುಗಳಾದ ಸುಧಾಕರ ಸಾಲಿಯಾನ್, ಪ್ರಕಾಶ್ ಪುತ್ರನ್, ನವೀನ್ ಕುದ್ರೋಳಿ, ವಿಕ್ರಾಂತ್ ಕುದ್ರೋಳಿ, ಶ್ರೀಕಾಂತ್ ಬೆಂಗ್ರೆ, ಸೆಲೀಂ ಕಸಬಾ, ಸತ್ತಾರ್, ಹಸನಬ್ಬ, ಸೆಮೀರ್, ರಿಯಾಜ್, ಶಾಫಿ, ಮುತ್ತಮ್ಮ, ದಾಕ್ಷಾಯಿಣಿ, ಹೊನ್ನಮ್ಮ, ರಾಧಾ, ಕವಿತಾ ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles