ಮಂಗಳೂರು : ಗುರುವಾರ ರಾತ್ರಿಯಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಉಳ್ಳಾಲ ತಾಲೂಕಿನ ಮೋಂಟೆಪದವು ಹಿತ್ತಿಲು ಕೋಡಿ ಕೊಪ್ಪಲ ಬಳಿ ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ, ಇಬ್ಬರು ಮೊಮ್ಮಕಳು ಮೃತಪಟ್ಟಿದ್ದಾರೆ. ಅಜ್ಜಿ ಪ್ರೇಮ (58) ಹಾಗೂ ಮೊಮ್ಮಕ್ಕಳಾದ ಆರ್ಯನ್ (3) ,ಆಯುಷ್ (2) ಮೃತಪಟ್ಟವರು.ಪ್ರೇಮ ಅವರ ಪತಿ ಕಾಂತಪ್ಪ , ಸೊಸೆ ಅಶ್ವಿನಿ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂತಪ್ಪ ಪೂಜಾರಿ ಅವರ ಪುತ್ರ ಸೀತಾರಾಮ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಸುಮಾರು ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಘಟನೆ ನಡೆದಿದ್ದು,ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಪ್ರೇಮ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡ ಕಾಂತಪ್ಪ ಅವರನ್ನು ಆಸ್ಪತ್ರೆಗೆ ದಾಖಲಾಯಿತು. ಗಿದ್ದಾರೆ. ರಕ್ಷಣಾ ಕಾಯಾ೯ಚರಣೆ ನಡೆಸಿ ಆರ್ಯನ್ (3) ,ಆಯುಷ್ (2) ಅವರನ್ನು ಹೊರತೆಗೆದರೂ ಬದುಕುಳಿಯಲಿಲ್ಲ. ಬಳಿಕ ಸ್ಥಳಕ್ಕೆ ಎನ್ ಡಿ ಆರ್ ಎಫ್, ಎಸ್ ಡಿಆರ್ ಪಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ಮುಂದುವರಿಸಿದರು.
