24.3 C
Karnataka
Thursday, April 30, 2026

ಬರಹಗಾರರು ಓದುಗರ ಧ್ವನಿಯಾಗಬೇಕು : ದಾಮೋದರ ಮಾವ್ಜೊ

ಮ೦ಗಳೂರು: ಜೀವನವು ಪ್ರಕೃತಿ ಮತ್ತು ವಿಕೃತಿಯ ನಡುವಿನ ನಿರಂತರ ಸಂಘರ್ಷವಾಗಿದೆ. ಈ ಹೋರಾಟವು ಹೌದು ಮತ್ತು ಇಲ್ಲ ಎಂಬ
ಆಯ್ಕೆಗಳಿಂದ ತುಂಬಿದೆ. ಪ್ರತಿಯೊಬ್ಬ ಮನುಷ್ಯನೂ ಈ ನಿರ್ಧಾರಗಳ ಮೂಲಕ ತಮ್ಮ ದಾರಿಯನ್ನು ಕಂಡುಕೊಳ್ಳುತ್ತಾನೆ. ಸಾಹಿತ್ಯದ
ಪಾತ್ರವು ಈ ಗೊಂದಲದ ಮೂಲಕ ಅವರಿಗೆ ಮಾರ್ಗದರ್ಶನ ನೀಡುವುದು ಎಂದು ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ
ದಾಮೋದರ ಮಾವ್ಜೊ ಅಭಿಪ್ರಾಯಪಟ್ಟರು.

ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕವಿ /ವಿಮರ್ಶಕ ಎಚ್‌. ಎಂ. ಪೆರ್ನಾಲ್ ಅವರ ಕವಿತಾ ಸಂಕಲನ ;ಜನೆಲ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇಂದಿನ ಓದುಗರು ಬದಲಾಗಿದ್ದಾರೆ. ಅವರು ಸಾಹಿತ್ಯದಲ್ಲಿ ತಮ್ಮನ್ನು ತಾವು ಹುಡುಕುತ್ತಾರೆ. ಬರಹಗಾರರು ಅವರಧ್ವನಿಯಾಗಬೇಕು. ಎಚ್‌ಎಂ ಪೆರ್ನಾಲ್ ಅವರ ಕವಿತೆಗಳು ಈ ಸಂಘರ್ಷವನ್ನು ಪ್ರತಿಧ್ವನಿಸುತ್ತವೆ. ಅವರ ಕವಿತೆಗಳು ಆಗಾಗ್ಗೆಕಗ್ಗತ್ತಲೆಯ ಛಾಯೆಯನ್ನು ಹೊಂದಿರುತ್ತವೆ, ಆದರೆ ಆ ಕಗ್ಗತ್ತಲೆಯೊಳಗೆ ಅನಿರ್ವಾದ್ಯ ಸತ್ಯವಿದೆ, ಅದನ್ನು ವಿಶಿಷ್ಟ ವ್ಯಂಗ್ಯದೊಂದಿಗೆಮಂಡಿಸಲಾಗಿದೆ ಎಂದು ಮಾವ್ಜೋ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಶನ್ ಕೊಂಕಣಿ ಪ್ರವರ್ತಕಮೈಕಲ್ ಡಿ’ಸೋಜಾ, ಕೊಂಕಣಿ ಸಾಹಿತ್ಯವನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಪೆರ್ನಾಲ್ ಅವರ ಸಮರ್ಪಣೆಯನ್ನು ಶ್ಲಾಘಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಲಹಾ ಸಮಿತಿಯ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್, ಜನೆಲ್ ಪುಸ್ತಕವನ್ನು ಪರಿಚಯಿಸಿದರು. ಪೆರ್ನಾಲ್ ಅವರ ಕವಿತೆಗಳು ಸಾಮಾನ್ಯ ಅನುಭವಗಳನ್ನು ಗಾಢವಾದ ಸತ್ಯಗಳಾಗಿ ಪರಿವರ್ತಿಸುತ್ತದೆ. ಮೊದಲನೋಟಕ್ಕೆ ಕಗ್ಗತ್ತಲೆಯಂತೆ ಕಾಣಬಹುದು, ಆದರೆ ಆ ಕಗ್ಗತ್ತಲೆಯೊಳಗೆ ಅನುಕ್ತ ಸತ್ಯಗಳಿವೆ ಎಂದು ರೊಡ್ರಿಗಸ್ ಹೇಳಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮತ್ತು ಕವಿತಾ ಟ್ರಸ್ಟ್‌ನ ಅಧ್ಯಕ್ಷ ಕಿಶೂ ಬಾರ್ಕೂರ್ಉ ಪಸ್ಥಿತರಿದ್ದರು. ಎಚ್‌ಎಂ ಪೆರ್ನಾಲ್ ಸ್ವಾಗತಿಸಿದರು. ಕವಿ, ಚಿಂತಕ ಟೈಟಸ್ ನೊರೊನ್ಹಾ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles