23 C
Karnataka
Friday, May 1, 2026

ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ಯಾತ್ರೆ

ಮ೦ಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು, ಭಾರತೀಯ ರೈಲ್ವೆ ಕ್ಯಾಟರಿಂಗ್ಮತ್ತು ಪ್ರವಾಸೋದ್ಯಮ ನಿಗಮದ (IRCTC) ಸಹಯೋಗದೊಂದಿಗೆ, ಕರ್ನಾಟಕದ ನಿವಾಸಿಗಳಿಗಾಗಿ ವಿಶೇಷವಾಗಿ ‘ಭಾರತ ಗೌರವ ಪ್ರವಾಸಿ ರೈಲು ಯೋಜನೆ’ ಅಡಿಯಲ್ಲಿ ವಿಶೇಷ ಪ್ರವಾಸವನ್ನು ಆಯೋಜಿಸಿದೆ.
ಈ ಕಾಶಿ ದರ್ಶನ ಯಾತ್ರೆಯು 9 ದಿನಗಳ ಅವಧಿಯ ಪ್ರವಾಸವಾಗಿದ್ದು, ಸೆಪ್ಟೆಂಬರ್ 21 ರಿಂದ 29 ರವರೆಗೆ ನಡೆಯಲಿದೆ. ಈಯಾತ್ರೆಯು ಯಶವಂತಪುರ/ಎಸ್‌ಎಂವಿಟಿ ಬೆಂಗಳೂರಿನಿಂದ ಪ್ರಾರಂಭವಾಗಲಿದ್ದು, ಯಶವಂತಪುರ/ ಎಸ್ಎಂವಿಟಿ ಬೆಂಗಳೂರು,ತುಮಕೂರು, ಬಿರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಯಾತ್ರಾರ್ಥಿಗಳು ಹತ್ತಲು ಅವಕಾಶವಿದೆ.
ಈ ಪ್ರವಾಸದಲ್ಲಿ ಒಳಗೊಂಡಿರುವ ಪ್ರಮುಖ ಸ್ಥಳಗಳು:
 ವಾರಾಣಸಿ: ಕಾಶಿ ವಿಶ್ವನಾಥ ದೇವಾಲಯ, ತುಳಸಿ ಮಂದಿರ ಮತ್ತು ಸಂಕಟ ಮೋಚನ ಹನುಮಾನ್ ದೇವಾಲಯ
 ಅಯೋಧ್ಯೆ: ರಾಮ ಮಂದಿರ ಮತ್ತು ಹನುಮಾನ್ ಗಡಿ.
 ಗಯಾ ಮತ್ತು ಬೋಧಗಯಾ: ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯ
 ಪ್ರಯಾಗರಾಜ್: ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನ.

ಪ್ರತಿ ವ್ಯಕ್ತಿಗೆ ಈ ಪ್ರವಾಸದ ವೆಚ್ಚ ₹22,500/-.
ವಿಶೇಷ ಸಬ್ಸಿಡಿ: ಕರ್ನಾಟಕ ಸರ್ಕಾರವು ಕರ್ನಾಟಕದ ನಿವಾಸಿಗಳಿಗೆ ಮಾತ್ರ ವಿಶೇಷವಾಗಿ 7,500 ರೂ. ಸಬ್ಸಿಡಿಯನ್ನು ನೀಡಿದ್ದು, ಯಾತ್ರೆಯನ್ನು ಮತ್ತಷ್ಟು ಕೈಗೆಟುಕುವಂತೆ ಮಾಡಿದೆ.
ಪ್ರವಾಸದ ಪ್ರಮುಖ ವೈಶಿಷ್ಟ್ಯಗಳು:
 ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಮೂರನೇ ಎಸಿ ದರ್ಜೆಯಲ್ಲಿ ಪ್ರಯಾಣ.
 ತಂಗುವ ಸ್ಥಳಗಳಲ್ಲಿ ಅವಳಿ/ತ್ರಿವಳಿ ಜನರು ಹಂಚಿಕೊಳ್ಳುವ ಆಧಾರದ ಮೇಲೆ ಎಸಿ ರಹಿತ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ.
 ಯಾತ್ರಾ ಸ್ಥಳಗಳಲ್ಲಿ ಸ್ನಾನ ಮತ್ತು ವಾಸ್ತವ್ಯಕ್ಕೆ ಎಸಿ ರಹಿತ ಕೊಠಡಿಗಳ ವ್ಯವಸ್ಥೆ.
 ಎಲ್ಲಾ ಊಟಗಳು (ಸಸ್ಯಾಹಾರಿ ಮಾತ್ರ) ಈ ಪ್ಯಾಕೇಜ್‌ನಲ್ಲಿ ಸೇರಿವೆ.
 ಎಸಿ ರಹಿತ ಬಸ್‌ಗಳ ಮೂಲಕ ಪ್ರವಾಸ ಮತ್ತು ಸ್ಥಳ ವೀಕ್ಷಣೆ.
 ಪ್ರತಿ ಕೋಚ್‌ಗೆ ಪ್ರವಾಸ ಮಾರ್ಗದರ್ಶಕರ ಸೇವೆ.
 ಎಲ್ಲಾ ಪ್ರಯಾಣಿಕರಿಗೆ ಪ್ರಯಾಣ ವಿಮೆ.
 IRCTC ರೈಲು ವ್ಯವಸ್ಥಾಪಕ.
 ರೈಲಿನಲ್ಲಿ ಭದ್ರತಾ ವ್ಯವಸ್ಥೆ ಮತ್ತು ಎಲ್ಲಾ ಅನ್ವಯಿಕ ತೆರಿಗೆಗಳನ್ನು ಒಳಗೊಂಡಿದೆ.
ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಕಾಯ್ದಿರಿಸಲು, IRCTC ಕಚೇರಿಗಳನ್ನು ಸಂಪರ್ಕಿಸಬಹುದು:
 ಬೆಂಗಳೂರು: 9003141707 / 8595931290 / 8595931291
 ಮೈಸೂರು: 8595931294
 ಹುಬ್ಬಳ್ಳಿ: 8595931293
 ವೆಬ್‌ಸೈಟ್: www.irctctourism.com.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles