23.9 C
Karnataka
Sunday, September 13, 2026

ಸುದ್ದಿ

ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸು ಅಪಘಾತ : ಹಲವರಿಗೆ ಗಾಯ

0
ಮಂಗಳೂರು: ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ಖಾಸಗಿ ಬಸ್ಸೊಂದು ಉರುಳಿ ಹಲವು ಮ೦ದಿ ಪ್ರಯಾಣಿಕರು ಗಾಯಗೊ೦ಡ ಘಟನೆ ಮ೦ಗಳವಾರ ಸ೦ಜೆ ಸ೦ಭವಿಸಿದೆ.ಕಿನ್ನಿಗೋಳಿಯಿ೦ದ ಬಿ ಸಿ ರೋಡ್‌ ಕಡೆಗೆ ಬಸ್ಸು ತೆರಳುತ್ತಿತ್ತು. ಬಸ್ಸು ಗುರುಪುರ ಕೈಕಂಬ ಪೊಳಲಿ ದ್ವಾರದ ಬಳಿ ತಿರುವಿನಲ್ಲಿ ಸುಮಾರು ೬.೩೫ ರ ವೇಳೆಗೆ ಸಾಗುತ್ತಿದ್ದಾಗ ಬ್ರೇಕ್‌ ಫೈಲ್‌ಆಗಿ ಚಾಲಕನ ನಿಯಂತ್ರಣ...

ಮರಳು ಪೂರೈಕೆಗೆ ಆ್ಯಪ್

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಣಿಕೆ ನಿಯಂತ್ರಿಸಲು ಮತ್ತು ಸಾರ್ವಜನಿಕರ ಮರಳಿನ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಈ ಹಿಂದೆ ಜಾರಿಯಲ್ಲಿದ್ದ https://dksandbazar.com ಆ್ಯಪ್ ತಂತ್ರಾಂಶವನ್ನು ಪುನರ್ ಸ್ಥಾಪಿಸಲಾಗಿದೆ.ಜನವರಿ 2 ರಿಂದ ಸಾರ್ವಜನಿಕರು ಈ ಆ್ಯಪ್‍ನ ಮೂಲಕ ಸಾಮಾನ್ಯ ಮರಳನ್ನು ನೇರವಾಗಿ ಖರೀದಿಸಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು...

ಪಿಯುಸಿ ಆದವರಿಗೆ ಉದ್ಯೋಗ ತರಬೇತಿ: ಅರ್ಜಿ ಆಹ್ವಾನ

0
ಮಂಗಳೂರು,:ಹೆಚ್.ಸಿ.ಎಲ್ ಟೆಕ್ನಾಲೋಜಿಸ್ ವತಿಯಿಂದ 2022, 2023ರಲ್ಲಿ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಹಾಗೂ 2024ರಲ್ಲಿ ಉತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ TECH BEEತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 12 ತಿಂಗಳ ತರಬೇತಿ ನೀಡಲಾಗುತ್ತಿದ್ದು, ಆರು ತಿಂಗಳ ಇಂಟರ್ನ್‍ಶಿಪ್ ಸಮಯದಲ್ಲಿ ತಿಂಗಳಿಗೆ ರೂ. 10,000 ಸ್ಟೈಫಂಡ್ ನೀಡಲಾಗುತ್ತದೆ....

ಆರೋಗ್ಯದಿನದರ್ಶಿಕೆ ಬಿಡುಗಡೆ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ (ವಾರ್ಷಿಕ ಕ್ಯಾಲೆಂಡರ್) ಆರೋಗ್ಯ ದಿನದರ್ಶಿಕೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಬಿಡುಗಡೆಗೊಳಿಸಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಬರುವ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಪ್ರತಿ ತಿಂಗಳುಗಳಲ್ಲಿ ಬರುವ ವಿಶೇಷ...

ಶಿಲ್ಪಕಲೆಯ ಮೇರು ವ್ಯಕ್ತಿ ಅಮರಶಿಲ್ಪಿ ಜಕಣಾಚಾರಿ: ಜಿಲ್ಲಾಧಿಕಾರಿ

0
ಮಂಗಳೂರು: ನೂರಾರು ವರ್ಷಗಳ ಹಿಂದೆಯೇ ಶಿಲ್ಪಕಲೆಗೆ ಅತ್ಯುನ್ನತ ಮೆರುಗು ತಂದು ಇತಿಹಾಸದ ಭವ್ಯ ಸಾಕ್ಷ್ಯ ನೀಡಿದ ಮೇರು ವ್ಯಕ್ತಿ ಅಮರಶಿಲ್ಪಿ ಜಕಣಾಚಾರಿ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ತಿಳಿಸಿದ್ದಾರೆ.ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .ಬೇಲೂರು ಹಳೇಬೀಡಿನಂತಹ ಭವ್ಯ ಇತಿಹಾಸದ ಉತ್ಕೃಷ್ಟ ಶಿಲ್ಪ ಕಲೆಯನ್ನು...

ಸುರತ್ಕಲ್ ಸುಭಾಷಿತ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ

0
ಸುರತ್ಕಲ್: ಇಲ್ಲಿನ ಸುಭಾಷಿತ ನಗರದಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಫುಟ್ ಪಾತ್, ಚರಂಡಿ, ರಸ್ತೆ ಹಂಪ್ಸ್ ಮತ್ತಿತರ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯಕ್ರಮ ಆದಿತ್ಯವಾರ ಸಂಜೆ ನೆರವೇರಿತು.ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು,...

ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ಸಾವು

0
ಬ೦ಟ್ವಾಳ: ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು ಕ್ರಾಸ್ ಕೊಡ್ಯಮಲೆ ಎಂಬಲ್ಲಿ ಎ೦ಬಲ್ಲಿ ಡಿ.31ರಂದು ಬೆಳಗ್ಗಿನ ಜಾವ ಸ೦ಭವಿಸಿದೆ.ಗೌತಮ್ (27) ಮೃತಪಟ್ಟವರು.ಸರಪಾಡಿ ನಿವಾಸಿ ಪ್ರವೀಣ್‌ ಕುಮಾರ್‌ ಡಿ.31ರಂದು ಬೆಳಗ್ಗಿನ ಜಾವ ಮೋಟಾರ್ ಸೈಕಲ್ ನಲ್ಲಿ ತೆರಳುತ್ತಾ, ಮರಾಯಿದೊಟ್ಟು ಕ್ರಾಸ್ ಕೊಡ್ಯಮಲೆಗೆ ತಲುಪಿದಾಗ, ಸ್ಕೂಟರ್ ಸವಾರನೊಬ್ಬ...

ಯುವ ಪರಿವರ್ತಕರ ಹಾಗೂ ಯುವ ಸಮಲೋಚಕರ ತರಬೇತಿ: ಅರ್ಜಿ ಆಹ್ವಾನ

0
ಮಂಗಳೂರು: ಜನ ಆರೋಗ್ಯ ಸಂಸ್ಥೆ ಎಪಿಡೀಮಿಯಾಲಜಿ ವಿಭಾಗ, ನಿಮಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ “ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಯುವ ಸ್ಪಂದನ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆ” ಸ್ಪಂದನ ಅಡಿಯಲ್ಲಿ ಯುವ ಪರಿವರ್ತಕರ ಹಾಗೂ ಯುವ ಸಮಲೋಚಕರ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ...

ನೈರುತ್ಯ ಪದವೀಧರ ಕ್ಷೇತ್ರ: ದ.ಕ. 16869, ಶಿಕ್ಷಕರ ಕ್ಷೇತ್ರ: 6753 ಮತದಾರರು

0
ಮ೦ಗಳೂರು: ವಿಧಾನಪರಿಷತ್ ನೈರುತ್ಯ ಕ್ಷೇತ್ರಗಳ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಪದವೀಧರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16869 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 6753 ಮತದಾರರು ಇದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರು ಜಿಲ್ಲೆಯ ಅಂತಿಮ ಮತದಾರರ ಪಟ್ಟಿ...

ಜನವರಿ 3ರಂದು ಸಿರಿಧಾನ್ಯ ನಡಿಗೆ

0
ಮಂಗಳೂರು: ಜಿಲ್ಲೆಯ ಕೃಷಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ 2023ರ ಪ್ರಯುಕ್ತ ಸಿರಿಧಾನ್ಯ ನಡಿಗೆ ಕಾರ್ಯಕ್ರಮ 2024ರ ಜನವರಿ 3 ಬುಧವಾರ ಬೆಳಿಗ್ಗೆ 7 ಗಂಟೆಗೆನಗರದ ಪುರಭವನದಿಂದ ಪ್ರಾರಂಭಗೊಂಡು ಹಂಪನಕಟ್ಟೆ ಸರ್ಕಲ್, ವಿಶ್ವಭವನ, ಸಿಟಿಸೆಂಟರ್, ನವಭಾರತ್ ಸರ್ಕಲ್, ಬೆಸೆಂಟ್, ಬಳ್ಳಾಲ್‍ಬಾಗ್ ಸರ್ಕಲ್, ಮಂಗಳೂರು ಮಹಾನಗರಪಾಲಿಕೆ ರಸ್ತೆ ಮೂಲಕ ಲೇಡಿಹಿಲ್ ಸರ್ಕಲ್ ಆಗಿ ಮಂಗಳಾ...