27.9 C
Karnataka
Sunday, September 13, 2026

ಸುದ್ದಿ

ಲಾರಿಗೆ ಬೈಕ್‌ ಡಿಕ್ಕಿ : ಸವಾರ ಸಾವು

0
ಉಪ್ಪಿನಂಗಡಿ: ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಕೌಕ್ರಾಡಿಯಲ್ಲಿ ಸ೦ಭವಿಸಿದೆ. ಸುರೇಂದ್ರ ಮಹತೋ ಮೃತಪಟ್ಟ ಬೈಕ್‌ ಸವಾರ.ಅ.1 ರಂದು ರಾತ್ರಿ 9 ಗಂಟೆಗೆ ಸುರೇಂದ್ರ ಮಹತೋ ಅವರು, ಕೌಕ್ರಾಡಿ ಗ್ರಾಮದ ಕೌಕ್ರಾಡಿ ಪಂಚಾಯತ್‌ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕ್‌ ಲಾರಿಗೆ ಡಿಕ್ಕಿಯಾಗಿರುತ್ತದೆ. ಅಪಘಾತದ ಪರಿಣಾಮ...

ಬಾಲ ಗೌರವ ಪ್ರಶಸ್ತಿಗಾಗಿ ಅರ್ಜಿ ಅಹ್ವಾನ

0
ಮಂಗಳೂರು:ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಿಂದ 2023-24ನೇ ಸಾಲಿನ ಬಾಲ ಗೌರವ ಪ್ರಶಸ್ತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.18 ವರ್ಷದೊಳಗಿನ ಮಕ್ಕಳು ಕ್ರೀಡೆ, ಸಂಗೀತ ,ನೃತ್ಯ ಬಹುಮುಖ ಪ್ರತಿಭೆ ,ಚಿತ್ರಕಲೆ ಹಾಗೂ ವಿಜ್ಞಾನ ಮತ್ತು ಸಂಶೋಧನೆ ಹೀಗೆ 6 ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿ 2022-23ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ...

ವಿದ್ಯುತ್ ಶಾಕ್ ತಗುಲಿ ಶಾಮಿಯಾನ ಕಾಮಿ೯ಕ ಸಾವು

0
ಮ೦ಗಳೂರು: ವಿದ್ಯುತ್ ಶಾಕ್ ತಗುಲಿ ಶಾಮಿಯಾನ ಕಾಮಿ೯ಕ ಮೃತಪಟ್ಟ ಘಟನೆ ಮೂಡುಶೆಡ್ಡೆಯಲ್ಲಿ ಮ೦ಗಳವಾರ ರಾತ್ರಿ ಸ೦ಭವಿಸಿದೆ. ಸೋನು ಸಿಂಗ್ ಗೋಂಡಾ ಮೃತಪಟ್ಟ ಕಾಮಿ೯ಕ.ಸೋನು ಸಿಂಗ್ ಗೋಂಡಾ ಅವರು ಮೂಡುಶೆಡ್ಡೆಯಲ್ಲಿರುವ ಶಾಮಿಯಾನ ಅಂಗಡಿಯೊ೦ದರಲ್ಲಿ ಕಳೆದ 5 ತಿಂಗಳಿಂದ ಕೆಲಸ ಮಾಡಿಕೊಂಡಿದ್ದು ಮ೦ಗಳವಾರ ಶಾಮಿಯಾನ ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ಶಾಮಿಯಾನ ಅಂಗಡಿಗೆ ಬಂದಿದ್ದು ನಂತರ...

ಶ್ರೀರಾಜ್ ಬಿ.. ಎಸ್ .ಗೆ ಡಾಕ್ಟರೇಟ್

0
ಮಂಗಳೂರು:‌ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಉಪನ್ಯಾಸಕ ಶ್ರೀರಾಜ್ ಬಿ. ಎಸ್ ಅವರು ಮಂಡಿಸಿದ ಮಹಾಪ್ರಬಂಧ- "ಸೋಶಿಯೊ - ಎಕನಾಮಿಕ್ ಡೆವಲಪ್ಮೆಂಟ್ ಥ್ರೂ ಟೂರಿಸಂ - ಎ ಕಂಪರೇಟಿವ್ ಸ್ಟಡಿ ಆಫ್ ಕಾಸರಗೋಡು ಅಂಡ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್" (Socio -Economic Development through Tourism - A Comparative Study of...

ಕನ್ನಡ ಉಳಿಯಬೇಕಾದರೆ ಕನ್ನಡ ಬಳಸಬೇಕು: ಡಾ. ತಾರಾನಾಥ

0
ಮಂಗಳೂರು: ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಿದರೆ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯ,ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಾರಾನಾಥಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾನೂನು ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕವನ ರಚನಾಕಮ್ಮಟ ಕಾರ್ಯಕ್ರಮದಲ್ಲಿ...

ಬ್ಯಾಂಕ್ ಆಫ್ ಬರೋಡಾದಿ೦ದ ವಿಜಿಲೆನ್ಸ್‌ ಜಾಗೃತಿ ಸಪ್ತಾಹ

0
ಮಂಗಳೂರು : ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ಶಾಖೆಯಿಂದ ;ಭ್ರಷ್ಟಾಚಾರ ತ್ಯಜಿಸಿ,ರಾಷ್ಟ್ರಕ್ಕೆ ಬದ್ಧರಾಗಿರಿ; ಎಂಬ ಧ್ಯೇಯದೊಂದಿಗೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಅ.31ರಂದು ಬೆಳಿಗ್ಗೆ 6.30 ಗಂಟೆಗೆ ವಾಕಥಾನ್ ಜರಗಿತು.ಮ೦ಗಳೂರು ಪೊಲೀಸ್‌ ಆಯುಕ್ತ ಅನುಪಮ್ ಅಗರ್ವಾಲ್ ಅತಿಥಿಯಾಗಿ ವಾಕಥಾನ್‌ಗೆ ಚಾಲನೆ ನೀಡಿದರು. ವಿಜಯ...

ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್: ವಾಹನ ಸಂಚಾರ ನಿಷೇಧ, ಮಾರ್ಪಾಡು

0
ಮಂಗಳೂರು : ನ.1 ರಂದು ಸಂಜೆ 4 ಗಂಟೆಗೆ 68 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಂಗಳೂರು ನಗರ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ಜೊತೆಯಾಗಿ ನಡೆಯೋಣ, ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್-2023 ಮೆರವಣಿಗೆಯಲ್ಲಿ 120 ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಸುಮಾರು 5000 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ಸರೆ. ವಾಕಥಾನ್ ಪುರಭವನದಿಂದ ಹೊರಟು ಹಂಪನಕಟ್ಟೆ, ಕೆ.ಎಸ್.ರಾವ್...

ಸಾಹಿತಿ, ಲೇಖಕ ಶೇಖರ್ ಅಜೆಕಾರ್ ನಿಧನ

0
ಕಾಕ೯ಳ: ಸಾಹಿತಿ, ಲೇಖಕ ಶೇಖರ್ ಅಜೆಕಾರ್ ಹೃದಯಘಾತದಿಂದ ಮಂಗಳವಾರ ಬೆಳಗ್ಗೆ ನಿಧನ ಹೊಂದಿದರು.ಶೇಖರ್ ಅಜೆಕಾರ್ ಅವರು 22 ಪುಸ್ತಕಗಳನ್ನು ಬರೆದಿದ್ದಾರೆ. ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತಿದ್ದರು. ಶೇಖರ್ ಅವರು ಕುಂದಪ್ರಭ ವಾರಪತ್ರಿಕೆಯಲ್ಲಿ ಬರಹಗಾರರಾಗಿ ತಮ್ಮ ಪ್ರಯಾಣ ಪ್ರಾರಂಭಿಸಿದರು. ಮುಂಬೈನ ‘ಕರ್ನಾಟಕ ಮಲ್ಲ’, ಜನವಾಹಿನಿ, ಡೈಜಿವರ್ಲ್ಡ್, ಕನ್ನಡಪ್ರಭ ಮತ್ತು ಉಷಾ ಕಿರಣಗಳಲ್ಲೂ...

ಮಿಜಾರುಗುತ್ತು ಆನಂದ ಆಳ್ವ ನಿಧನ‌

0
ಮೂಡಬಿದಿರೆ: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ತಂದೆ ಮಿಜಾರುಗುತ್ತು ಆನಂದ ಆಳ್ವ ಅವರು ಮ೦ಗಳವಾರ ನಿಧನರಾದರು.106 ವರ್ಷ ಪ್ರಾಯದ ಆನಂದ ಆಳ್ವ ಅವರು ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿ ಗುರುತಿಸಿಕೊಂಡಿದ್ದರು. ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.ಪ್ರಗತಿಪರ ರೈತರೂ ಆಗಿದ್ದ...

ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ಯುವಕ ಆತ್ಮಹತ್ಯೆ

0
ಮ೦ಗಳೂರು : ಉಳ್ಳಾಲ ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೋವ೯ ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ..ಚಿಕ್ಕಮಗಳೂರು ಗ್ರಾಮಾ೦ತರದ ಬೈರಪುರ ಕಾತಿ೯ಕೆರೆ ನಿವಾಸಿ ಶಂಕರಗೌಡ ಎಂಬವರ ಪುತ್ರ ಪ್ರಸನ್ನ ಕುಮಾರ್‌ (36) ಆತ್ಮಹತ್ಯೆ ಮಾಡಿಕೊ೦ಡಿರುವ ಯುವಕ.ಮಧ್ಯಾಹ್ನ ಒ೦ದು ಗ೦ಟೆಯ ವೇಳೆಗೆ ತೊಕ್ಕೊಟ್ಟು ಕಡೆಯಿಂದ ಬಂದು ರಾ.ಹೆ.66...