ಅನನ್ಯ ಅಮೀನ್ ಬೆಂಗ್ರೆಗೆ “ತುಳುನಾಡ ಕೇಸರಿ” ಪ್ರಶಸ್ತಿ

0
ಮಂಗಳೂರು:ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಮೃತ ಮಹೋತ್ಸವ ಅಂಗವಾಗಿ ದಕ್ಷಿಣ ಕನ್ನಡ ಅಮೆಚೂರ್ಕುಸ್ತಿ ಸಂಘ ಸಹಭಾಗಿತ್ವದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ “ತುಳುನಾಡ ಕೇಸರಿ” ಪ್ರಶಸ್ತಿಯನ್ನು ಅನನ್ಯ ಅಮೀನ್ ಬೆಂಗ್ರೆ ಅವರುಗೆದ್ದುಕೊಂಡಿದ್ದಾರೆ.ಅವರು ಬೆಂಗ್ರೆ ವೀರ ಮಾರುತಿಯ ವ್ಯಾಯಾಮ ಶಾಲೆಯನ್ನು ಪ್ರತಿನಿಧಿಸಿದ್ದರು.ತುಳುನಾಡ ಕೇಸರಿ ದಿ. ಮೋಹನ್ ಕರ್ಕೇರ ಕುಸ್ತಿ ಅಖಾಡದಲ್ಲಿ ಡಿ.24ರಂದು ಕುಸ್ತಿ ಪಂದ್ಯಾಟ ನಡೆದಿತ್ತು.

ಡಿ.30ಕ್ಕೆ “ಮಂಗಳೂರು ಕಂಬಳ”

ಮಂಗಳೂರು: ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿಸೆಂಬರ್ 30ರಂದು ಮಂಗಳೂರು ಕಂಬಳ ಅದ್ಧೂರಿಯಾಗಿ ನಡೆಯಲಿದ್ದು ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಡಿ.30ರಂದು ಬೆಳಗ್ಗೆ 8:30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ...

ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭನನದಲ್ಲಿ ನೆರವೇರಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಬಾಪೂಜಿ ಅವರೊಂದಿಗೆ ಸೇರಿಕೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂಬ ಸಂಸ್ಥೆ...

ಕೊಂಕಣಿ ಮಾತೃಭಾಷೆ ಪ್ರಬ೦ಧ ಸ್ರರ್ಧೆಯ ಫಲಿತಾಂಶ ಪ್ರಕಟ

ಮ೦ಗಳೂರು: ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಸುವರ್ಣ ಮಹೋತ್ಸವ ಸಮಾರೋಪ ಕಾರ್ಯಕ್ರಮ ಜನವರಿ 9 ಮಂಗಳವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಈ ಸಂದರ್ಭಕ್ಕಾಗಿ ವಿದ್ಯಾರ್ಥಿಗಳಿಗೆ ಕೊಂಕಣಿ ಹಿರಿಯ ಕವಿಗಳು ಹಾಗೂ‌ ಲೇಖಕರ ಬಗ್ಗೆ ತಿಳಿದು ಬರೆಯಲು ಪ್ರಬ೦ಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ವಿಜೇತರು ಈ‌ ಕೆಳಗಿನವರು: ಪ್ರಥಮ ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಫ್ರಾಂಕ್ಲಿನ್...

ತಿರುವನಂತಪುರ-ಕಾಸರಗೋಡು ವಂದೇಭಾರತ್ ಮಂಗಳೂರಿಗೆ ವಿಸ್ತರಿಸಲು ನಳಿನ್ ಕುಮಾರ್ ಕಟೀಲ್ ಮನವಿ

0
ಮಂಗಳೂರು :ತಿರುವನಂತಪುರ-ಕಾಸರಗೋಡು ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮಂಗಳೂರು ತನಕ ವಿಸ್ತರಿಸುವಂತೆ ಹಾಗೂ ಮಂಗಳೂರಿನಿಂದ ಕೊಚ್ಚಿನ್ ಗೆ ಇನ್ನೊಂದು ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ನೀಡುವಂತೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ರವರಿಗೆ ಮನವಿ...

ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಬಾಲ ನಟ ತನ್ಮಯ್‌ಆರ್ ಶೆಟ್ಟಿ ಆಯ್ಕೆ

ಮಂಗಳೂರು : ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿ, ಬಾಲನಟತನ್ಮಯ್‌ಆರ್. ಶೆಟ್ಟಿಅವರುಕರ್ನಾಟಕರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತನ್ಮಯ್‌ಆರ್. ಶೆಟ್ಟಿ ಸಿನಿಮಾಕ್ಷೇತ್ರದಲ್ಲಿ ಬಾಲ ನಟನಾಗಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ತನ್ಮಯ್ ಶೆಟ್ಟಿಅವರು ಮಗನೇ ಮಹಿಷ (ತುಳು), ಅಪರಾಧಿ ನಾನಲ್ಲ (ತುಳು), ಅಬತರ (ತುಳು), ಬನ್-ಟೀ (ಕನ್ನಡ), ಕರಿ ಹೈದಕರಿಅಜ್ಜ (ಕನ್ನಡ, ತುಳು,...

ಕಣ್ಣೂರು: 750 ಮೆ.ಟನ್ಅನಧಿಕೃತ ಮರಳು ದಾಸ್ತಾನು ವಶ

0
ಮಂಗಳೂರು: ಮಂಗಳೂರು ತಾಲ್ಲೂಕು ಕಣ್ಣೂರು ಗ್ರಾಮದ ಬಡ್ಲ ಗುತ್ತು ಎಂಬಲ್ಲಿ ಅನಧಿಕೃತವಾಗಿ ಸಾಮಾನ್ಯ ಮರಳನ್ನು ದಾಸ್ತಾನು ಮಾಡಿರುತ್ತಾರೆ ಎಂಬ ಮಾಹಿತಿಯಂತೆ ಡಿ.27ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಇ.ಸಿ ದ್ವಿತೀಯ, ಹಿರಿಯ ಭೂವಿಜ್ಞಾನಿ ಕೆ.ಎಂ ನಾಗಭೂಷಣ್ ಹಾಗೂ ಭೂವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು...

ಬಂದೂಕು ತರಬೇತಿಗೆ ಅರ್ಜಿ ಆಹ್ವಾನ

0
ಮಂಗಳೂರು:ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರಿಗಾಗಿ ಬಂದೂಕು ತರಬೇತಿಯನ್ನು ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.ಈ ತರಬೇತಿ ಪಡೆದುಕೊಳ್ಳಲು ಆಸಕ್ತಿಯುಳ್ಳವರು ಉಪ ಪೊಲೀಸ್ ಆಯುಕ್ತರ ಕಚೇರಿ, ನಗರ ಸಶಸ್ತ್ರ ಮೀಸಲು ಪಡೆ ಮಂಗಳೂರು ನಗರ ಕಚೇರಿಯಲ್ಲಿ ನಿಗದಿತ ಅರ್ಜಿಯನ್ನು ಪಡೆದು 3 ಪಾಸ್ ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ಜನವರಿ 10ರೊಳಗೆ...

ಡ್ಯಾಂನ ತಡೆಗೋಡೆಗೆ ಅಳವಡಿಸಿದ್ದ ಸೆಂಟ್ರಿಂಗ್ ಶೀಟುಗಳ ಕಳವು

0
ಉಪ್ಪಿನಂಗಡಿ: ಡ್ಯಾಂನ ತಡೆಗೋಡೆಗೆ ಅಳವಡಿಸಿದ್ದ ಸೆಂಟ್ರಿಂಗ್ ಶೀಟುಗಳನ್ನು ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನಡೆದಿದೆ.ಬೆದ್ರೋಡಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಕನ್ಸಟ್ರಕ್ಷನ್ ನಡೆಯುತ್ತಿದ್ದು, ಡ್ಯಾಂನ ತಡೆಗೋಡೆಗೆ ಅಳವಡಿಸಿದ 60 ಸೆಂಟ್ರಿಂಗ್ ಶೀಟುಗಳ ಪೈಕಿ 39 ಸೆಂಟ್ರಿಂಗ್ ಶೀಟುಗಳನ್ನು ಡಿ.23 ರ ರಾತ್ರಿಯಿಂದ ಡಿ. 24ರ ಬೆಳಿಗ್ಗಿನ ಅವಧಿಯಲ್ಲಿಕಳ್ಳರು ಕಳವು ಮಾಡಿಕೊಂಡು...

ಬಿ.ಸಿ ರೋಡು: ಹೋಟೆಲ್ ನ ಶಟರ್ ಬಾಗಿಲಿನ ಬೀಗ ಮುರಿದು ಹಣ ಕಳವು

0
ಬಂಟ್ವಾಳ : ಬಿ.ಸಿ .ರೋಡು ಮುಖ್ಯ ರಸ್ತೆಯಲ್ಲಿರುವ ಹೊಟೇಲ್ ವೊ೦ದರ ಶಟರ್ ಬಾಗಿಲಿನ ಬೀಗ ಮುರಿದು ಹಣ ಕಳವು ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡಿ. 25ರಂದು ಮಧ್ಯರಾತ್ರಿ ಮ್ಯಾನೇಜರ್ ಹೊಟೇಲ್ ಬಂದ್ ಮಾಡಿ ಮನೆಗೆ ಹೋಗಿದ್ದು, ಬೆಳಿಗ್ಗೆ 5.30 ಗಂಟೆಯ ವೇಳೆಗೆ ಹೊಟೇಲ್ ನಲ್ಲಿ ಬೆಳಿಗ್ಗೆ ಕೆಲಸ ಮಾಡುವ ಸಿಬ್ಬ೦ದಿ...