ಅಡ್ಯಾರ್ ಬ್ರಹ್ಮಕಲಶೋತ್ಸವ : ಧಾರ್ಮಿಕ ವಿಧಿ ಚಪ್ಪರ ಮುಹೂರ್ತ
ಮಂಗಳೂರು: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಡ್ಯಾರ್ ಇಲ್ಲಿನಗ್ರಾಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಾಚ್೯ 1 ರಿಂದ 9 ರ ತನಕ ನಡೆಯಲಿರುವ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪ್ರಥಮ ಧಾರ್ಮಿಕ ವಿಧಿ ಚಪ್ಪರ ಮುಹೂರ್ತ ಕ್ಷೇತ್ರದ ತಂತ್ರಿವರೇಣ್ಯರಾದ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ನೆರವೇರಿತು. ಕ್ಷೇತ್ರದ ಆಡಳಿತ ಸಮಿತಿ, ಪುನಃ ನಿರ್ಮಾಣ ಸಮಿತಿ ಮತ್ತು...
ಗಣೇಶ ಕೇಳಿದ ವರ ಕೊಡುವ ದೇವರು :ನಾಗರಾಜ ಶೆಟ್ಟಿ
ಮಂಗಳೂರು: ಗಣಪತಿಯು ಭಕ್ತರ ಇಷ್ಟಾರ್ಥ ಈಡೇರಿಸುವ ದೇವರು ಎಂದು ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ ಅವರು ಹೇಳಿದರು.ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆದ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪ ಸಮಾರಂಭದ...
ಕಾವೂರು ಮಂಜಲಕಟ್ಟೆ ಶ್ರೀ ಕೋದ೯ಬ್ಬು ದೈವಸ್ಥಾನ: ಕಂಬೆರ್ಲಕಲ ಜೀರ್ಣೋದ್ಧಾರ
ಕಾವೂರು ಮಂಜಲಕಟ್ಟೆ ಶ್ರೀ ಕೋದ೯ಬ್ಬು ದೈವಸ್ಥಾನ ಕಾವೂರು ಇದರ ಕಂಬೆರ್ಲಕಲ ಜೀರ್ಣೋದ್ಧಾರಗೊಂಡು ಪುನಃ ಪ್ರತಿಷ್ಠೆ, ಧಾರ್ಮಿಕ ಸಭಾ ಕಾರ್ಯಕ್ರಮ ಗಿರಿಜಾತೆ ಆರ್.ಭಂಡಾರಿ ದೆಪ್ಪುಣಿಗುತ್ತು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದೈವಸ್ಥಾನದ ವಠಾರದಲ್ಲಿ ಜರಗಿತು.ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಹಿರಿಯರು - ಕಿರಿಯರ ಸಂಪೂರ್ಣ ಸಹಕಾರದಿಂದ ದೈವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು...
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ: ಬ್ರಹ್ಮಕಲಶೋತ್ಸವ – ಮೂಡಪ್ಪ ಸೇವೆ
ಮ೦ಗಳೂರು: ಕುಂಬಳೆ ಸೀಮೆಯ ಹಾಗೂ ಉತ್ತರ ಕೇರಳದ ಪ್ರಸಿದ್ದ ದೇವಾಲಯವಾದ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯವು ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ – ಮೂಡಪ್ಪ ಸೇವೆಯ ಸಂಭ್ರಮದಲ್ಲಿದೆ. ಮಾ. 27 ರಿಂದ ಏ. 7ರ ತನಕ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶ ಮತ್ತು ಮೂಡಪ್ಪ ಸೇವೆ ಇತ್ಯಾದಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎ೦ದು ಮಧುಸೂಧನ್ ಅಯಾರ್...
ಬಂಟ್ಸ್ ಹಾಸ್ಟೇಲ್ : ಸಾರ್ವಜನಿಕ ಶ್ರೀಗಣೇಶೋತ್ದವ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀಗಣೇಶೋತ್ದವದ ಬಂಟ್ಸ್ ಹಾಸ್ಟೇಲ್ ಓಂಕಾರ ನಗರಕ್ಕೆ ಶರವು ಬಳಿಯ ಶ್ರೀ ರಾಧಾಕೃಷ್ಣ ದೇವಸ್ಥಾನದಿಂದ ಸಿದ್ದಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೇಲ್ ಓಂಕಾರ ನಗರಕ್ಕೆ ತರಲಾಯಿತು.ಸಿದ್ದಿ ವಿನಾಯಕ ಪ್ರತಿಷ್ಢಾನದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಬಂಟರ ಯಾನೆ...
ಅಗಲ್ಪಾಡಿ ಯಾಗ: ಐಕ್ಯಮತ್ಯ ಹೋಮ ಪೂರ್ಣಾಹುತಿ
ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಋಕ್ ಸಂಹಿತಾ ಯಾಗ ಐಕ್ಯಮತ್ಯ ಹೋಮ, ರುದ್ರ ಹೋಮ, ಧನ್ವಂತರಿ ಹೋಮ ಮತ್ತು ಸಹಸ್ರ ಚಂಡಿಕಾ ಯಾಗಗಳ ನಾನಾ ವೈಧಿಕ ಕಾರ್ಯಕ್ರಮಗಳ ಎರಡನೇ ದಿನವಾದ ಗುರುವಾರ ಬೆಳಗ್ಗೆ ಕಲಶ ಸ್ಥಾಪನೆಯಾಗಿ ಐಕ್ಯಮತ್ಯ ಹೋಮ ನಡೆಯಿತು. ಮಧ್ಯಾಹ್ನ...
ಮೂಡುಶೆಡ್ಡೆಯ ಶ್ರೀ ಆದಿ ಕ್ಷೇತ್ರ ಜಾರ ಜಾರಂದಾಯ ದೈವಸ್ಥಾನ ನಿರ್ಮಾಣಕ್ಕೆ ನಿಧಿಕುಂಭ-ಶಿಲಾನ್ಯಾಸ
ಗುರುಪುರ : ಮೂಡುಶೆಡ್ಡೆಯ ಶ್ರೀ ಆದಿ ಕ್ಷೇತ್ರ ಜಾರದ ಸಾನಿಧ್ಯದಲ್ಲಿ ನ. ೩೦ರಂದು ಬೆಳಿಗ್ಗೆ ೯ಕ್ಕೆ ಜಾರದ ಕಲ್ಲುರ್ಟಿ ದೈವ, ಸಾರಾಳ ಜುಮಾದಿ(ಧೂಮಾವತಿ) ಬಂಟ ಹಾಗೂ ಪರಿವಾರ ದೈವಗಳಿಗೆ ಹಾಗೂ ಬೆಳಿಗ್ಗೆ ೧೧ ಗಂಟೆಗೆ ಶ್ರೀ ಆದಿ ಜಾರ ಕ್ಷೇತ್ರದ ಜಾರದ ಗಿರಿಯಲ್ಲಿ ಗ್ರಾಮದ ದೈವ ಶ್ರೀ ಜಾರಂದಾಯ ಬಂಟ, ಸಾರಾಳ ಜುಮಾದಿ ಬಂಟ...
ತೆಕ್ಕಾರು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಳದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ
ಬೆಳ್ತ೦ಗಡಿ:ತೆಕ್ಕಾರು: ಭಗವಂತ ನಮ್ಮ ಅಂತರಾಳದಲ್ಲಿದ್ದಾರೆ ಎಂದು ವೇದ, ಉಪನಿಷತ್ತುಗಳು, ಗ್ರಂಥಗಳು ಹೇಳುತ್ತವೆ. ಇದನ್ನು ತಿಳಿಯುವುದು ಕಷ್ಟ ಇದನ್ನು ಇಂದು ತಿಳಿಯಪಡಿಸುವ ಕಾರ್ಯವನ್ನು ಶ್ರದ್ಧಾಕೇಂದ್ರಗಳು ಮಾಡುತ್ತಿವೆ. ಇದಕ್ಕಾಗಿ ಶ್ರದ್ಧಾಕೇಂದ್ರಗಳ ಅಭಿವೃದ್ಧಿಯನ್ನು ನಾವು ಮಾಡಬೇಕು ಎಂದು ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದಾರೆ ಎ೦ದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜೆ ಹೇಳಿದ್ದಾರೆ.ತೆಕ್ಕಾರು ದೇವರಗುಡ್ಡೆ...
ಶಿಬರೂರು ಕ್ಷೇತ್ರದಲ್ಲಿ ಮಹಾ ಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ
ಸುರತ್ಕಲ್ : ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆದ ಬ್ರಹ್ಮಕುಂಭಾಭಿಷೇಕ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಮಹಾ ಸಂಪ್ರೋಕ್ಷಣೆ, ಮಂಗಳ ಮಂತ್ರಾಕ್ಷತೆ, ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ, ಕಟೀಲು ಹರಿನಾರಾಯಣ ದಾಸ ಆಸ್ರಣ್ಣರ ಉಪಸ್ಥಿತಿಯಲ್ಲಿ ನಡೆಯಿತು.ತಿಬಾರ್ ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗುತು ಮನೆಯವರು, ವಿವಿಧ...
ಭಗವಂತನ ಮೇಲೆ ಭರವಸೆಯಿಟ್ಟು ಮುನ್ನಡೆಯಬೇಕು: ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ
ಸುರತ್ಕಲ್: "ವೈಷಿಷ್ಠ್ಯಪೂರ್ಣವಾದ ಆಚರಣೆ ನಮ್ಮ ತುಳುನಾಡಿನದ್ದು. ಶಿಬರೂರಿನ ಶಿಖರ ಅಂದರೆ ಕೊಡಮಣಿತ್ತಾಯ ದೈವದ ಸನ್ನಿಧಿ. ಕೆಲವರಿಗೆ ಭಗವಂತ ನಮ್ಮನ್ನು ನೋಡುತ್ತಾನೆ ಎಂಬ ಭಯ ಇರುತ್ತದೆ, ಕೆಲವರಲ್ಲಿ ಭರವಸೆ ಇರುತ್ತದೆ. ತಪ್ಪು ಕೆಲಸ ಮಾಡಿದವನಿಗೆ ಮಾತ್ರ ಭಯ ಇರೋದು ಆದ್ದರಿಂದ ನಾವು ಭರವಸೆ ಹೊಂದಿದವಾರಾಗಿರಬೇಕು. ಹುಡುಕುವುದಾದರೆ ನಮ್ಮಲ್ಲಿನ ಒಳ್ಳೆಯ ಗುಣಗಳನ್ನು ಹುಡುಕೋಣ. ಕೆಟ್ಟ ಗುಣ ಹುಡುಕಲು...










