ಮಂಗಳೂರು: ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ಅ.23 ರಿಂದ ನ.5 ರವರೆಗೆ 14 ದಿನಗಳು ನಡೆದ ಗೃಹರಕ್ಷಕರ “ಪ್ರವಾಹ ರಕ್ಷಣಾ ತರಬೇತಿ”ಯಲ್ಲಿ ಕರ್ನಾಟಕ ರಾಜ್ಯದ 27 ಜಿಲ್ಲೆಯ ಗೃಹರಕ್ಷಕರು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಘಟಕದ ಗೃಹರಕ್ಷಕರಾದ ಸಂತೋಷ್ ಸಲ್ದಾನ, ಮತ್ತು ತೃತೇಶ್ ಇವರು ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿರುತ್ತಾರೆ. ಚಿನ್ನದ ಪದಕ ವಿಜೇತರಾದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ಸಂತೋಷ್ ಸಲ್ದಾನ ಇವರಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಅನಿಲ್ ಕುಮಾರ್ ಎಸ್. ಬೂಮರೆಡ್ಡಿ ಅಭಿನಂದಿಸಿದರು.


